Nov 212018
ಕನ್ನಡ ಸಾಹಿತ್ಯ ರಂಗವು 2019 ರಲ್ಲಿ ನಡೆಸಲಿರುವ ಸಮ್ಮೇಳನವನ್ನು, ಮೇ ತಿಂಗಳಿನ 18 ಮತ್ತು 19ರ ಶನಿವಾರ ಮತ್ತು ಭಾನುವಾರಗಳಂದು, ನ್ಯೂಜೆರ್ಸಿಯಲ್ಲಿ, ತ್ರಿವೇಣಿ ಕನ್ನಡ ಕೂಟದ ಸಹಯೋಗದೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಲು ಲೇಖಕ ವಸುಧೇಂದ್ರ ಅವರು ಒಪ್ಪಿದ್ದಾರೆಂದು ತಿಳಿಸಲು ಸಂತೋಷವಾಗುತ್ತಿದೆ. ಈ ಬಾರಿಯ ಸಮ್ಮೇಳನವು ಸಮಾಜದ ವಿವಿಧ ಕ್ಷೇತ್ರಗಳಲ್ಲಾಗಿರುವ ‘ಬದಲಾವಣೆಯನ್ನು’ ಮುಖ್ಯ ವಿಷಯವನ್ನಾಗಿ ಇರಿಸಿಕೊಂಡಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ.
Date: May 18 & 19, 2019